ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಧಗ್ರಾ ಯೋಜನೆಯ ವತಿಯಿಂದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಜಾಗೃತಿ ಆನ್ ಲೈನ್ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಜಯ ಲತಾ ಕೆ.ಆರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಅಖಿಲ ಭಾರತ ಜನಜಾಗೃತಿ ವೇದಿಕೆಯ ಜಾಲ್ಸೂರು ವಲಯ ಅಧ್ಯಕ್ಷ ಭಾಸ್ಕರ ಅಡ್ಕಾರ್ ವಹಿಸಿದರು.
ಯೋಜನೆಯ ಮೇಲ್ವಿಚಾರಕಿ ಜಯಶ್ರೀ, ಸೇವಾ ಪ್ರತಿನಿಧಿ ಬಾಲಕೃಷ್ಣ ವೇದಿಕೆಯಲ್ಲಿ ಇದ್ದರು.
ಬಳಿಕ ಆನ್ ಲೈನ್ ಮೂಲಕ
ಸಂಪನ್ಮೂಲ ವ್ಯಕ್ತಿಗಳಾದ
ಡಾ.ವೆಂಕಟೇಶ್ ಪ್ರಸನ್ನ ಎಸ್ ಪಿ ಬೆಂಗಳೂರು, ಬೆಂಗಳೂರು ಹೃದ್ರೋಗ ತಜ್ಞ
ಡಾ. ದೇವಿ ಪ್ರಸಾದ್ ಶೆಟ್ಟಿ ಮಾಹಿತಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಮಾಹಿತಿ ನೀಡಿದರು.
ಧಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಯವರು ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆ ಅವರು ದುಶ್ಚಟ ಮುಕ್ತ ಜೀವನ ನಡೆಸುವಂತೆ ಶುಭ ಸಂದೇಶ ನೀಡಿದರು.
ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.






























































