ತೊಡಿಕಾನ : ಗಾಳಿ ಮಳೆಗೆ ತೆಂಗಿನ ಮರ ಮನೆಗೆ ಬಿದ್ದು ವ್ಯಕ್ತಿಗೆ ಗಾಯ
ತೊಡಿಕಾನ ಗ್ರಾಮದ ಅಡಿಗಾರ ಜನರ್ದಾನ ಅವರ ಮನೆಗೆ ಮಾ.31ರಂದು ಸುರಿದ ಭಾರೀ ಗಾಳಿಗೆ ಮನೆಗೆ ತೆಂಗಿನ ಮರ ಮುರಿದು ಬಿದ್ದು ಮನೆಯಲ್ಲಿದ್ದ ಅವರ ಮಗ ನಿತ್ಯಾನಂದ ಗಾಯಗೊಂಡ ಘಟನೆ ವರದಿಯಾಗಿದೆ.ನಿತ್ಯಾನಂದ ಮತ್ತು ಅವರ ಪತ್ನಿ ಮನೆಯ ಮನೆಯಲ್ಲಿರುವಾಗ ಘಟನೆ ನಡೆದಿದೆ.ಮನೆ ಸಂಪೂರ್ಣ ಹಾನಿಗೊಂಡಿದೆ.ಕಂದಾಯ ನಿರೀಕ್ಷಾ ಅವೀನ್ ರಂಗತ್ ಮಲೆಯವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ನಿತ್ಯಾನಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ತೊಡಿಕಾನ : ಗಾಳಿ ಮಳೆಗೆ ತೆಂಗಿನ ಮರ ಮನೆಗೆ ಬಿದ್ದು ವ್ಯಕ್ತಿಗೆ ಗಾಯ Read More »









