Uncategorized

ತೊಡಿಕಾನ : ಗಾಳಿ ಮಳೆಗೆ ತೆಂಗಿನ ಮರ ಮನೆಗೆ ಬಿದ್ದು ವ್ಯಕ್ತಿಗೆ ಗಾಯ

ತೊಡಿಕಾನ ಗ್ರಾಮದ ಅಡಿಗಾರ ಜನರ್ದಾನ ಅವರ ಮನೆಗೆ ಮಾ.31ರಂದು ಸುರಿದ ಭಾರೀ ಗಾಳಿಗೆ ಮನೆಗೆ ತೆಂಗಿನ ಮರ ಮುರಿದು ಬಿದ್ದು ಮನೆಯಲ್ಲಿದ್ದ ಅವರ ಮಗ ನಿತ್ಯಾನಂದ ಗಾಯಗೊಂಡ ಘಟನೆ ವರದಿಯಾಗಿದೆ.ನಿತ್ಯಾನಂದ ಮತ್ತು ಅವರ ಪತ್ನಿ‌ ಮನೆಯ ಮನೆಯಲ್ಲಿರುವಾಗ ಘಟನೆ ನಡೆದಿದೆ.ಮನೆ ಸಂಪೂರ್ಣ ಹಾನಿಗೊಂಡಿದೆ.ಕಂದಾಯ ನಿರೀಕ್ಷಾ ಅವೀನ್ ರಂಗತ್ ಮಲೆಯವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.ನಿತ್ಯಾನಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ತೊಡಿಕಾನ : ಗಾಳಿ ಮಳೆಗೆ ತೆಂಗಿನ ಮರ ಮನೆಗೆ ಬಿದ್ದು ವ್ಯಕ್ತಿಗೆ ಗಾಯ Read More »

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು‌ : ಶಾಸಕಿ ಭಾಗೀರಥಿ ಮುರುಳ್ಯ

ಬ್ರಿಟಿಷ ವಿರುದ್ಧ ಹೋರಾಟ ಮಾಡಿದಸಮರವೀರ ಕೆದಂಬಾಡಿ ರಾಮಯ್ಯ ಗೌಡರನ್ನು ನೆನಪಿಸುವ ಮೂಲಕ ಅವರ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು‌ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಾ. 31 ರಂದು ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಬೆಳ್ಳಾರೆಯಲ್ಲಿ ರಾಮಯ್ಯ‌ಗೌಡರ ಪತ್ಥಳಿ ಸ್ಥಾಪನೆ ಮಾಡುವುದರ ಮೂಲಕ ಬೆಳ್ಳಾರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಬೇಡಿಕೆ ಇದೆ.ಈ ನಿಟ್ಟಿನಲ್ಲಿ ಇಲ್ಲಿಗೆ ರೂ.25ಕೋಟಿ

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು‌ : ಶಾಸಕಿ ಭಾಗೀರಥಿ ಮುರುಳ್ಯ Read More »

ಕೊರಗ ಸಮುದಾಯ ಸಬಲೀಕರಣಕ್ಕೆ ಉತ್ತೇಜನ: ಸಮುದಾಯಕ್ಕೆ ಸೀಲಿಂಗ್ ಯಂತ್ರ ವಿತರಣೆ

ಸುಳ್ಯ, ಮಾ.28: ಅರಂತೋಡು ಗ್ರಾಮದ ಪ್ರಕೃತಿ ವನ್ ಧನ್ ವಿಕಾಸ್ ಕೇಂದ್ರದ ಮೂಲಕ ಆದಿವಾಸಿ ಸಮುದಾಯಗಳ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಿ ₹41,000 ಮೌಲ್ಯದ ಸೀಲಿಂಗ್ ಯಂತ್ರವನ್ನು ವಿಶೇಷವಾಗಿ ದುರ್ಬಲ ಆದಿವಾಸಿ ಗುಂಪಾದ ಕೊರಗ ಸಮುದಾಯಕ್ಕೆ ವಿತರಿಸಲಾಯಿತು.ಕೇಂದ್ರ ಸರ್ಕಾರದ ಗಿರಿಜನ ವ್ಯವಹಾರಗಳ ಸಚಿವಾಲಯದ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಅರಣ್ಯ ಸಂಪನ್ಮೂಲಗಳ ಸತತ ಬಳಕೆಯ ಮೂಲಕ ಆದಾಯ ಹೆಚ್ಚಿಸುವುದನ್ನು ಉದ್ದೇಶಿಸಿದೆ. ಸೀಲಿಂಗ್ ಯಂತ್ರದ ಸಹಾಯದಿಂದ ಉತ್ಪನ್ನಗಳ ಪ್ಯಾಕೇಜಿಂಗ್ ಸುಧಾರಿಸಿ, ಮಾರುಕಟ್ಟೆ ಮೌಲ್ಯ ಹೆಚ್ಚಿಸುವಲ್ಲಿ ನೆರವಾಗಲಿದೆ.ಈ ನೆರವು ಐಸಿಎಆರ್-ಡಿಸಿಆರ್, ಪುತ್ತೂರು

ಕೊರಗ ಸಮುದಾಯ ಸಬಲೀಕರಣಕ್ಕೆ ಉತ್ತೇಜನ: ಸಮುದಾಯಕ್ಕೆ ಸೀಲಿಂಗ್ ಯಂತ್ರ ವಿತರಣೆ Read More »

ಪಟಾಕಿ ಸಿಡಿಸಿದ್ದರಿಂದ ರೊಚ್ಚಿಗೆದ್ದ ಕಾಡಾನೆ ಆಟೋವನ್ನು ಮಾಡಿದ್ದೇನು ನೋಡಿ!

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ದೈತ್ಯ ಒಂಟಿಸಲಗ ಗ್ರಾಮಕ್ಕೆ ನುಗ್ಗಿ, ಕೃಷ್ಣಪ್ಪ ಎಂಬುವವರಿಗೆ ಸೇರಿದ ಆಟೋವನ್ನು ಜಖಂಗೊಳಿಸಿದೆ. ಆನೆಯನ್ನು ಓಡಿಸಲು ಪಟಾಕಿ ಸಿಡಿಸಿದಾಗ, ಅದು ರೊಚ್ಚಿಗೆದ್ದು ಆಟೋ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ವಾರದಿಂದ ಈ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಕೃಷಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.

ಪಟಾಕಿ ಸಿಡಿಸಿದ್ದರಿಂದ ರೊಚ್ಚಿಗೆದ್ದ ಕಾಡಾನೆ ಆಟೋವನ್ನು ಮಾಡಿದ್ದೇನು ನೋಡಿ! Read More »

21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಅನುಮತಿ

ಮಧ್ಯಪ್ರಾಚ್ಯದ ಯುದ್ದದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ 21 ರಾಜ್ಯಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೀಮೆಎಣ್ಣೆ ನೀಡಲು ಕೇಂದ್ರ ಸರ್ಕಾರ ತಾತ್ಕಾಲಿಕ ಅನುಮತಿ ನೀಡಿದೆ. ಪ್ರತಿ ಜಿಲ್ಲೆಯ ತೈಲ ಕಂಪನಿಗಳು 5,000 ಲೀಟರ್ ಸಂಗ್ರಹಿಸಲು ಸೂಚಿಸಲಾಗಿದ್ದು, ಅಡುಗೆ ಮತ್ತು ದೀಪಗಳ ಬಳಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಸೀಮೆಎಣ್ಣೆ ಮುಕ್ತವೆಂದು ಘೋಷಿತವಾದ ಪ್ರದೇಶಗಳಿಗೂ ಇದು ಅನ್ವಯಿಸಲಿದೆ

21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಅನುಮತಿ Read More »

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದೆಯಾ?

ಪತಿಯ ನಿಧನದ ನಂತರ ಅತ್ತೆ-ಮಾವಂದಿರ ಆಸ್ತಿಯಲ್ಲಿ ಸೊಸೆಯ ಹಕ್ಕಿನ ಕುರಿತು ಹಿಂದೂ ಉತ್ತರಾಧಿಕಾರ ಕಾಯ್ದೆ ಸ್ಪಷ್ಟನೆ ನೀಡಿದೆ. ಅತ್ತೆ-ಮಾವ ಸ್ವಯಾರ್ಜಿತವಾಗಿ (ಸ್ವಂತ ದುಡಿಮೆಯಿಂದ) ಗಳಿಸಿದ ಆಸ್ತಿಯಲ್ಲಿ ಸೊಸೆಗೆ ಕಾನೂನುಬದ್ದವಾಗಿ ನೇರ ಹಕ್ಕಿರುವುದಿಲ್ಲ. ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ಪತಿಯ ಮರಣದ ನಂತರವೂ ಸೊಸೆಯು ಈ ಆಸ್ತಿಯಲ್ಲಿ ತನಗೆ ಪಾಲಿದೆ ಎಂದು ಕಾನೂನುಬದ್ಧವಾಗಿ ಹಕ್ಕು ಸಾಧಿಸಲು ಬರುವುದಿಲ್ಲ. ಮಾಲೀಕರು ವಿಲ್ (Will) ಮಾಡಿ ಮೃತಪಟ್ಟರೆ ಮಾತ್ರ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ. ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ನೀಡುವ ಸಂಪೂರ್ಣ

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದೆಯಾ? Read More »

ನಾಳೆ (ಮಾ.28)ಅರಂತೋಡು ಆಲೆಟ್ಟಿ ಗ್ರಾಮಗಳಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ದಿನಾಂಕ 28-03-2026 ನೇ ಶನಿವಾರ  ಅರಂತೋಡು ಮತ್ತು ಅಲೆಟ್ಟಿ ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ವಿನಂತಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.*ಅರಂತೋಡು*ಕಿರ್ಲಾಯ -ಪೂಜಾರಿಮನೆ -ಚೋಡಿಪಣೆ -ಚುಕ್ರಡ್ಕಸ್ಥಳ :ಕಿರ್ಲಾಯ ಚಾವಡಿ ಬಳಿಯಲ್ಲಿಸಮಯ :ಸಂಜೆ

ನಾಳೆ (ಮಾ.28)ಅರಂತೋಡು ಆಲೆಟ್ಟಿ ಗ್ರಾಮಗಳಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ Read More »

ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಮೆಸ್ಕಾಂ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸಲು ಆದೇಶ

ಕೆ.ಎಫ್.ಡಿ.ಸಿ ನಿಗಮದ ಸಿಬ್ಬಂದಿಗಳು ಹಾಗೂ ಕಾರ್ಮಿಕರು ವಾಸಿಸುತ್ತಿರುವ ವಸತಿ ಕಾಲೋನಿಗಳು ನಿಗಮದ ಆಸ್ತಿಯಾಗಿದ್ದು , ಮೆಸ್ಕಾಂ ಆದೇಶದನ್ವಯ ಎಲ್ಲಾ ವಿದ್ಯುತ್ ಸಂಪರ್ಕಗಳು ಭದ್ರತಾ ಠೇವಣಿಯನ್ನು ಪಾವತಿಸಬೇಕಿತ್ತು. ಅದೇ ರೀತಿಯಾಗಿ ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಭದ್ರತಾ ಠೇವಣಿಯನ್ನು ಮೆಸ್ಕಾಂ ಸಿಬ್ಬಂದಿಗಳು ಕಾರ್ಮಿಕರ ಬಳಿಯಿಂದಲೇ ವಸೂಲಿ ನಡೆಸುತ್ತಿದ್ದರು ಹಾಗೂ ಭದ್ರತಾ ಠೇವಣಿಯನ್ನು ಪಾವತಿಸಲಾಗದ ವಸತಿ ಗೃಹಗಳ ವಿದ್ಯುತ್ ಸಂಪರ್ಕಗಳನ್ನು ಖಡಿತಗೊಳಿಸುತ್ತಿದ್ದರು. ಈ ಕುರಿತು ಸಮಗ್ರ ಮಾಹಿತಿಯನ್ನು ಕೆ.ಎಫ್.ಡಿ.ಸಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ನಂದೀಶ್ ಅವರು ಸುಳ್ಯಕ್ಕೆ ಭೇಟಿ ನೀಡಿದ್ದ

ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಮೆಸ್ಕಾಂ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸಲು ಆದೇಶ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸಾಕ್ಷ್ಯ ಚಿತ್ರ ಬಿಡುಗಡೆ

ದೃಷ್ಟಿ ಮೀಡಿಯಾ ಸಂಸ್ಥೆಯ ನಿರ್ಮಾಣದಲ್ಲಿ ತಯಾರಿಸಿರುವ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕುರಿತಾದ ಶತಮಾನಗಳ ನಂಬಿಕೆ ಎಂಬ ಸಾಕ್ಷ್ಯಚಿತ್ರದ ಬಿಡುಗಡೆ ಸುಳ್ಯದಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್ ಭಾರದ್ವಾಜ್ ಅವರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿ, ತೊಡಿಕಾನ ದೇವಸ್ಥಾನದ ಕುರಿತಾದ ಸಾಕ್ಷ್ಯಚಿತ್ರ ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ತೋರಿಸುವ ಜತೆಗೆ ಕ್ಷೇತ್ರದ ಪರಿಚಯ, ವಿಶೇಷತೆಯನ್ನು ನಮಗೆ ತಿಳಿಸಿದೆ. ಇಂತಹ ಸಾಕ್ಷಚಿತ್ರಗಳು ಸುಳ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡುವಂತಾಗಲಿ ಎಂದರು.ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕಿರಿ ಮಾತನಾಡಿ,

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸಾಕ್ಷ್ಯ ಚಿತ್ರ ಬಿಡುಗಡೆ Read More »

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ಮೂವರು ವಿದ್ಯಾರ್ಥಿಗಳು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಇನ್‌ಸ್ಟೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಗಿರೀಶ್.ಕೆ,( 9ನೇ). ಈತ ಮಂಡೆಕೋಲು ಗ್ರಾಮದ ಕಾಯರ್ತೋಡಿ ಭಾಸ್ಕರ ಮತ್ತು ಸೌಮ್ಯ ದಂಪತಿಗಳ ಪುತ್ರ. ವಂಶಿತಾ, (8ನೇ) ಈಕೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ವಸಂತ ಮತ್ತು ಭವಾನಿ ದಂಪತಿಗಳ ಪುತ್ರಿ. ಜಸ್ಮಿತಾ ಕೆ.(1೦ನೇ) ಈಕೆ ಜಾಲ್ಸೂರು ಗ್ರಾಮದ ಕದಿಕಡ್ಕ ಬೇಬಿ.ಕೆ ಮತ್ತು ಭವಾನಿ ದಂಪತಿಗಳ ಪುತ್ರಿ.

ಪಯಸ್ವಿನಿ ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್ ಗೆ ಮೂವರು ವಿದ್ಯಾರ್ಥಿಗಳು ಆಯ್ಕೆ Read More »

error: Content is protected !!
Scroll to Top