March 2026

ಮೀನು ಹಿಡಿಯಲು ಹೊಳೆಗೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ

ಮಡಿಕೇರಿ ತಾಲೂಕು ಚೆಂಬು ಗ್ರಾಮದಲ್ಲಿ ಹೊಳೆಗೆ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಮಾ.23ರಂದು ವರದಿಯಾಗಿದೆ.ಚೆಂಬು ಗ್ರಾಮದ ಪರ್ದಾಯ ಗದ್ದೆ ಭಾಸ್ಕರ ಬೆಳ್ಚಪಾಡ ಎಂಬವರು ಮೀನು ಹಿಡಿಯಲು ಹೊಳೆಗೆ ಹೋದವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಹೊಳೆಗೆ ಹೋದವರು ಬಾರದೆ ಇದ್ದಾಗ ಅವರನ್ನು ಹುಡುಕಿಕೊಂಡು ಮನೆಯವರು ಹೋಗಿದ್ದು, ಹೊಳೆ ಬದಿಯಲ್ಲಿ ಮೃತಪಟ್ಟು ಬಿದ್ದಿದ್ದರು.ಮಡಿಕೇರಿ ಗ್ರಾಮಾಂತರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.ಶವವನ್ನು ಮುಂದಿನ ಕಾನೂನು ಕ್ರಮಕ್ಕೆ ಮಡಿಕೇರಿಯ ಶವಗಾರಕ್ಕೆ ಕೊಂಡೊಯ್ದಿದ್ದಾರೆ.

ಮೀನು ಹಿಡಿಯಲು ಹೊಳೆಗೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ Read More »

ಹರಿಹರ ಪಲ್ಲತ್ತಡ್ಕದಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ. ವಿಟ್ಲ, 3 ಎಫ್ ಆಯಿಲ್ ಪಾಮ್ (ಪ್ರೈ.) ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಹರಿಹರ ಇವರುಗಳ ಸಹಯೋಗದಲ್ಲಿ ರೈತರಿಗೆ ಏಣಿ ವಿತರಣಾ ಕಾರ್ಯಕ್ರಮ ಹರಿಹರ ಪಲ್ಲತಡ್ಕ ಕೊಲ್ಲಮೊಗ್ರ ಸೊಸೈಟಿ ಮುಂಭಾಗದಲ್ಲಿ ನಡೆಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ಕಟ್ಟೆಮನೆ ವಹಿಸಿದ್ದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಸಂಪಾಜೆ ಇವರು ರೇಷ್ಮೆ ಕೃಷಿ, ಮಲ್ಲಿಗೆ ಕೃಷಿ, ಗೇರು ಬೆಳೆಗಳ ಮೌಲ್ಯವರ್ಧನೆ, ಪ್ರಯೋಜನಗಳು ಹಾಗೂ

ಹರಿಹರ ಪಲ್ಲತ್ತಡ್ಕದಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ Read More »

ಅಡ್ತಲೆ -ಬೆದ್ರುಪಣೆ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ವಾರ್ಷಿಕ ನಡಾವಳಿ

ಅಡ್ತಲೆ -ಬೆದ್ರುಪಣೆ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ವಾರ್ಷಿಕ ನಡಾವಳಿಯು ಸುಗ್ಗಿ 7 ರ ದಿನಾಂಕ 21.03.2026 ರಂದು ಸಂಜೆ ಅಡ್ತಲೆ ಮೂಲಸ್ಥಾನದಿಂದ ಭಂಡಾರ ಹೋಗಿ ಕೂಡಿ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಸುಗ್ಗಿ 8 ರ ದಿನಾಂಕ 22.03.2026 ರಂದು ಬೆಳಿಗ್ಗೆ ಪ್ರಾತಃಕಾಲ ಶ್ರೀ ಉಳ್ಳಾಕುಲು ನೇಮ ನಡೆದು ಮಧ್ಯಾಹ್ನ ಪ್ರಧಾನಿ ಶ್ರೀ ಪುರುಷ ದೈವದ ನೇಮ ನಡೆಯಿತು.ನಂತರ ಅನ್ನಸಂತರ್ಪಣೆ ನಡೆಯಿತು.ಸಾಯಂಕಾಲ ದೀಟಿಗೆ ಪ್ರಧಾನಿ ಶ್ರೀ ರಾಜನ್ ದೈವದ ನೇಮ ನಡೆದು ರಾತ್ರಿ ಕೂಜಿ ದೈವಗಳ

ಅಡ್ತಲೆ -ಬೆದ್ರುಪಣೆ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ವಾರ್ಷಿಕ ನಡಾವಳಿ Read More »

ಕಲ್ಲುಗುಂಡಿ : ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘ ಕಲ್ಲುಗುಂಡಿ ಘಟಕದ ವಾರ್ಷಿಕ ಮಹಾಸಭೆಯು ಮಾರ್ಚ್ 20 ರಂದು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.ಮೊದಲಿಗೆ ಕುಮಾರಿ ಖುಷಿ ಅವರು ಪ್ರಾರ್ಥನೆ ನೆರವೇರಿಸಿದರು.ಗಣ್ಯರಿಂದ ದೀಪಬೆಳಗಿಸಿ ತಾಯಿ ಭಾರತಾಂಭೆ ಗೆ ಪುಷ್ಫಾರ್ಚಣೆ ಮಾಡಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಅತಿಥಿಗಳನ್ನು ಯಶೋದರ ಕಡೆಪಾಲ ಅವರು ಸ್ವಾಗತಿಸಿದರು.ಸಭೆಯ ಅದ್ಯಕ್ಷತೆಯನ್ನು ಕಲ್ಲುಗುಂಡಿ ಘಟಕದ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು B.M.S ನ ಅದ್ಯಕ್ಷರಾದ ಪ್ರಕಾಶ್ ಎಮ್.ಎಸ್ ನಿಕಟಪೂರ್ವ ಅದ್ಯಕ್ಷರಾದ ರಾದಕೃಷ್ಣ

ಕಲ್ಲುಗುಂಡಿ : ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ Read More »

ಮನೆಯಲ್ಲಿ ಏನೇ ಮಾಡಿದ್ರೂ ಹಣ ಉಳಿತಾಯವಾಗ್ತಿಲ್ವಾ? ಹೀಗೆ ಮಾಡಿ ನೋಡಿ

ಮನೆಯಲ್ಲಿ ದುಡಿದ ಹಣ ಉಳಿಯದೆ, ಅಶಾಂತಿ ಕಾಡುತ್ತಿದ್ದರೆ ವಾಸ್ತು ಪ್ರಕಾರ ಸಣ್ಣ ಬದಲಾವಣೆಗಳು ಉತ್ತಮ ಫಲ ನೀಡುತ್ತವೆ. ಕಾಮಧೇನು ಅಥವಾ ಗೋಮಾತೆಯ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಐಶ್ವರ್ಯ ವೃದ್ಧಿಗೆ ಸಹಾಯಕವೆಂದು ನಂಬಲಾಗಿದೆ. ಈಶಾನ್ಯ ದಿಕ್ಕು ಅತ್ಯುತ್ತಮವಾಗಿದ್ದು, ಇಲ್ಲಿ ಇಟ್ಟರೆ ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ. ಜಾಗವಿಲ್ಲದಿದ್ದರೆ ಉತ್ತರ ಅಥವಾ ಪೂರ್ವ ದಿಕ್ಕು ಬಳಸಬಹುದು. ಕರುವಿಗೆ ಹಾಲುಣಿಸುವ ಹಸುವಿನ ವಿಗ್ರಹ ಮಂಗಳಕರ. ದಕ್ಷಿಣ ಅಥವಾ ನೈರುತ್ಯದಲ್ಲಿ ಇಡುವುದು ಬೇಡ. ಒಡೆದ ವಿಗ್ರಹಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ವಾಸ್ತು

ಮನೆಯಲ್ಲಿ ಏನೇ ಮಾಡಿದ್ರೂ ಹಣ ಉಳಿತಾಯವಾಗ್ತಿಲ್ವಾ? ಹೀಗೆ ಮಾಡಿ ನೋಡಿ Read More »

ನಾಳೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು ದಿನಾಂಕ 23-03-2026 ನೇ ಸೋಮವಾರ ಮಂಡೆಕೋಲು ಮತ್ತು ತೊಡಿಕಾನ ದಲ್ಲಿ ಸಭೆ ನಡೆಯಲಿದೆ. ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.ಈ ಕೆಳಗಿನ ನಿವಾಸಿಗಳು ಕೆಳಗೆ ನಿಗದಿಪಡಿಸಿದ ಸ್ಥಳದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು‌ ಮನವಿ ಮಾಡಲಾಗಿದೆ.ಮಂಡೆಕೋಲು1) ಮಂಡೆಕೋಲು ಪ್ರಾಥಮಿಕ ಕೃಷಿ

ನಾಳೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ Read More »

ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ದೊಡ್ಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನ ೪೫ನೇ ವರ್ಷದ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ ಮಾ.21ರಂದು ಮತ್ತು ಮಾ.22ರಂದು ನಡೆಯಿತು.ಮಾ.೨೧ರಂದು ಬೆಳಗ್ಗೆ ಸ್ಥಳ ಶುದ್ದೀಕರಣ ೭ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ, ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ ೧೨ಕ್ಕೆ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿದು, ಬಟ್ಟಲು ಕಾಣಿಕೆ ಹೂವಿನ ಹಾರ

ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ Read More »

ಮೊಬೈಲ್ ಸ್ಪೋಟಗೊಂಡು ವ್ಯಕ್ತಿಗೆ ಗಾಯ

ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಮೊಬೈಲ್ ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ. ಗುರುಪ್ರಸಾದ್ ನಿಡುಬೆಎಂಬವರೇ ತನ್ನ ಮೊಬೈಲ್ ಸಿಡಿದು ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಅವರು ವಿವೋ ವೈ 100 ಎ ಮೊಬೈಲ್ ಉಪಯೋಗಿಸುತ್ತಿದ್ದು, ಮಾ.22ರಂದು ಮೊಬೈಲನ್ನು ತನ್ನ ಪ್ಯಾಂಟ್‌ನ ಕಿಸೆಯೊಳಗೆ ಹಾಕಿಕೊಂಡಿದ್ದರು. ಜೇಬಿನೊಳಗಿದ್ದ ಮೊಬೈಲ್ ಒಮ್ಮಿದೊಮ್ಮೆ ಸ್ಪೋಟಗೊಂಡು ತೊಡೆಯ ಭಾಗಕ್ಕೆ ಗಾಯವಾಗಿದೆ.ಕಾಲಿಗೂ ಗಾಯವಾವಾಗಿದ್ದು, ಕಾಲಿನ ತೊಡೆಯ ಭಾಗದಲ್ಲಿ ಮೊಬೈಲ್ ಇದ್ದ ಜಾಗದ ಚರ್ಮ ಬೆಂದು ಹೋಗಿದೆ.ಆಸ್ಪತ್ರೆಗೆ ತೆರಳಿ ಗುರುಪ್ರಸಾದ್ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮೊಬೈಲ್ ಸ್ಪೋಟಗೊಂಡು ವ್ಯಕ್ತಿಗೆ ಗಾಯ Read More »

ಮಾ.31ಕ್ಕೆ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಮಾ.31 ರಂದು ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯು ಮಾ.21 ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿದ್ದವರು ತಮ್ಮ ತಮ್ಮ ಭಿಪ್ರಾಯಗಳನ್ನು ತಿಳಿಸಿದರು.ಅಮರ ಸುಳ್ಯ ಸಮರ ಸಮಿತಿ ತಾಲೂಕು ಅಧ್ಯಕ್ಷ ಚಂದ್ರಾಕೋಲ್ಟಾರ್ ಮಾತನಾಡಿ ಐತಿಹಾಸಿಕ

ಮಾ.31ಕ್ಕೆ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ Read More »

ಗೂನಡ್ಕದ ಹೋಮ್ ಸ್ಟೇಯಲ್ಲಿ ಯುವಕ ಆತ್ಮಹತ್ಯೆ

ಗೂಡ್ಕದ ಹೋಮ್ ಸ್ಟೇ ಒಂದರಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.ಕಲ್ಲಡ್ಕ ಮೂಲದ ಯುವಕ ತಿಲಕರಾಜ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹವನ್ನು ಪೊಲೀಸರು ಆಗಮಿಸಿದ ಬಳಿಕ ಹೊರತೆಗೆಯಲಾಯಿತು.ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಗೂನಡ್ಕದ ಹೋಮ್ ಸ್ಟೇಯಲ್ಲಿ ಯುವಕ ಆತ್ಮಹತ್ಯೆ Read More »

error: Content is protected !!
Scroll to Top