April 2026

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಧರ್ಮಸ್ಥಳ ಇದರ “ಸಮುದಾಯ ಅಭಿವೃದ್ಧಿ ವಿಭಾಗ” ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ನೀಡಲಾಗಿದೆ. ಅನುದಾನ ಮಂಜುರಾತಿ ಪತ್ರವನ್ನು ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡರು ಹಸ್ತಾಂತರಿಸಿದರು. ಅನುದಾನ ಪಡೆಯಲು ಯೋಜನಾಧಿಕಾರಿ ಮಾದವ ಗೌಡ, ಸುರೇಶ್ ಕಣೆಮರಡ್ಕ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಶ್ರೀ ರಾಮಚಂದ್ರ ಕಲ್ಲುಗದ್ದೆ, ಒಕ್ಕೂಟ ಸೇವಾಪ್ರತಿನಿಧಿ ಜಯಲಕ್ಷ್ಮೀ ಸಹಕರಿಸಿದರು.ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶ್ರೀ ರಾಮಕೃಷ್ಣ ಭಜನಾ ಮಂದಿರ ಕಲ್ಲುಗುಂಡಿ ಇದರ ಜೀರ್ಣೋದ್ದಾರಕ್ಕೆ ರೂ. 1,50,000 ಅನುದಾನ ಮಂಜೂರು Read More »

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಅಡ್ತಲೆ ಸ್ಪಂದನ ಗೆಳಯರ ಬಳಗದಿಂದ ಶ್ರಮ ಸೇವೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಏ.5ರಂದು ಸೀಮೆಯ 18 ಗ್ರಾಮಗಳ ಭಕ್ತಾಧಿಗಳ ಮತ್ತು ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ದೇವಸ್ಥಾನದ ಪವಿತ್ರ ತೀರ್ಥ ಮೂಲಗಳಾದ ವಾರಾಣಸಿ ತೀರ್ಥ ಮತ್ತು ಮತ್ಸತೀರ್ಥ ಹಾಗೂ ದೇವಸ್ಥಾನದ ಪರಿಸರದ ಸ್ವಚ್ಛತೆ ಸಲುವಾಗಿ ಬ್ರಹತ್ ಕರಸೇವೆ ನಡೆಯಿತು.ಈ ಕರಸೇವೆಯಲ್ಲಿ ಸ್ಪಂದನ‌ ಗೆಳೆಯರ ಬಳಗ ಅಡ್ತಲೆ ತಂಡದವರು ಭಾಗವಹಿಸಿದರು. 18 ಗ್ರಾಮಗಳ ಸುಮಾರು 500ಕ್ಕೂ ಮಿಕ್ಕಿ ಕರಸೇವಕರು ಭಾಗವಹಿಸಿದರು‌.

ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಅಡ್ತಲೆ ಸ್ಪಂದನ ಗೆಳಯರ ಬಳಗದಿಂದ ಶ್ರಮ ಸೇವೆ Read More »

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್ 2026

ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿ ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಏರ್ಪಡಿಸಲಾಗಿದೆ‌.ಅದರಲ್ಲಿ ಜೇನು ಗಡ್ಡದಾರಿ ,ಕೃಷಿ ಹವ್ಯಾಸೀ ಬರಹಗಾರ ,ಕೃಷಿ ಸಂಶೋಧನೆ ಕಲಾ ನಿರ್ದೇಶಕ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿ ಆಯ್ಕೆಗೊಂಡಿದ್ದಾರೆ. ಪ್ರಶಸ್ತಿಗೆ ಆಯ್ಕೆಗೊಂಡವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಜನತಾ ಚಾನೆಲ್

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್ 2026 Read More »

9 ಮಂದಿ ಪೊಲೀಸರಿಗೆ ಗಲ್ಲು ಶಿಕ್ಷೆ ಐತಿಹಾಸಿಕ ತೀರ್ಪು ನೀಡಿದ ಮಧುರೈ ಕೋರ್ಟ್!

ಇಡೀ ದೇಶವನ್ನೇ ತಲ್ಲಣಗೊಳಿಸಿದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳಂನ ತಂದೆ-ಮಗನ ‘ಕಸ್ಟೋಡಿಯಲ್ ಡೆತ್’ ಪ್ರಕರಣಕ್ಕೆ ಸಂಬಂಧಿಸಿದಂತೆ 9ಮಂದಿ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿಮಧುರೈ ಜಿಲ್ಲಾ ನ್ಯಾಯಾಲಯ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ವಿಚಾರಣೆಯ ಹೆಸರಿನಲ್ಲಿ ಅಮಾನವೀಯ ಚಿತ್ರಹಿಂಸೆ ನೀಡಿ ಇಬ್ಬರ ಪ್ರಾಣ ತೆಗೆದ ಇನ್‌ಸ್ಪೆಕ್ಟರ್ ಸೇರಿದಂತೆ ಒಂಬತ್ತು ಪೊಲೀಸರಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.2020ರ ಜೂನ್ 19ರಂದು ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸುಳ್ಳು ಆರೋಪದ

9 ಮಂದಿ ಪೊಲೀಸರಿಗೆ ಗಲ್ಲು ಶಿಕ್ಷೆ ಐತಿಹಾಸಿಕ ತೀರ್ಪು ನೀಡಿದ ಮಧುರೈ ಕೋರ್ಟ್! Read More »

ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣರ ಪತ್ನಿ ರೂಪ ನಿಧನ

ಕಲ್ಮಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಸಾಯಿನಾರಣರ ಪತ್ನಿ ರೂಪ ಅನಾರೋಗ್ಯದಿಂದ ಏ.7ರಂದು ನಿಧನರಾದರು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳದರು. ಅವರಿಗೆ ಸುಮಾರು 41 ವರ್ಷವಾಗಿತ್ತು.ವೈದೇಹಿ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಸಕ್ರಿಯರಾಗಿದ್ದ ರೂಪಾರವರು ಮಹಿಳಾ ಮಂಡಲದ ಮೂಲಕ ಶಾರದೋತ್ಸವ ಆಚರಿಸುತ್ತಾ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೆಂಡೆ ವಾದನ ಕಲಿತು ಇತರರಿಗೆ ತರಬೇತಿ ನೀಡಿ ತಾನೇ ಒಂದು ತಂಡ ಕಟ್ಟಿದ್ದರು.

ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣರ ಪತ್ನಿ ರೂಪ ನಿಧನ Read More »

ಅಜ್ಜಾವರ : ಮಹೀಷಮರ್ದಿನಿ ದೇವಳದಲ್ಲಿ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ

ಅಜ್ಜಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ದೇವಳದಲ್ಲಿ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ವಿವಿಧ ವೈಧಿಕ ಪೂಜಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ದೇವಳದ ಸಮಿತಿಯವರು,ನೂರಾರು ಭಕ್ತರು ಉಪಸ್ಥಿತರಿದ್ದರು.

ಅಜ್ಜಾವರ : ಮಹೀಷಮರ್ದಿನಿ ದೇವಳದಲ್ಲಿ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ Read More »

ಇಂದು ಆಲೆಟ್ಟಿ, ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು ದಿನಾಂಕ 07-04-2026 ನೇ ಮಂಗಳವಾರ ಸುಳ್ಯ, ಆಲೆಟ್ಟಿ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಸಭೆ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಣ ಕೇಶವ ಕೊಳಲುಮೂಲೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.ಸುಳ್ಯಶಾಂತಿನಗರಸ್ಥಳ: ಶ್ರೀ ಮುತ್ತಪ್ಪ ದೇವಸ್ಥಾನಸಮಯ :ಸಂಜೆ 7:30ಕ್ಕೆಆಲೆಟ್ಟಿಅರಂಬೂರುಸ್ಥಳ

ಇಂದು ಆಲೆಟ್ಟಿ, ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಸಭೆ Read More »

ಸಂಪಾಜೆ ಗ್ರಾಮಕ್ಕೆ ಮೂರನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ

ಸುಳ್ಯ ತಾಲೂಕಿನಿಂದ ಸಂಪಾಜೆ ಗ್ರಾಮ ಗ್ರಾಮ ಪಂಚಾಯತ್ 2024-2025ನೇ ಸಾಲಿನ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.2024-2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ರಾಜ್ಯದ ಒಟ್ಟು 239 ತಾಲ್ಲೂಕುಗಳ ಪೈಕಿ ಬಾಗಲಕೋಟೆ ಜಿಲ್ಲೆಯ ‘ತೇರದಾಳ’ ತಾಲ್ಲೂಕನ್ನು ಹೊರತುಪಡಿಸಿ, ವಿಭಾಗ ಮಟ್ಟದ ಪುರಸ್ಕಾರಕ್ಕೆ 12, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ 31 ಹಾಗೂ ತಾಲ್ಲೂಕು ಮಟ್ಟದ ಪುರಸ್ಕಾರಕ್ಕೆ 195 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 238 ಗ್ರಾಮ ಪಂಚಾಯತಿಗಳನ್ನು 2024-25 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ನಿಯಮಾನುಸಾರವಾಗಿ

ಸಂಪಾಜೆ ಗ್ರಾಮಕ್ಕೆ ಮೂರನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ Read More »

ಅಜ್ಜಾವರ : ವೈಭವದಿಂದ ನಡೆದ ಶ್ರೀ ಮಹಿಷಮರ್ದಿನೀ ದೇವರ ಭೂತಬಲಿ ಉತ್ಸವ

ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಎ.5 ರಂದು ಶ್ರೀ ಭೂತಬಲಿ,ಉತ್ಸವ ಬಲಿ, ಪಲ್ಲಕ್ಕಿ ಸೇವೆ, ವಸಂತ ಮಂಟಪ ಪೂಜೆ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.ಸಂದರ್ಭದಲ್ಲಿ ಅಜ್ಜಾವರ ಮಹಿಷಮರ್ದಿನೀ ಸೇವಾ ಟ್ರಸ್ಟ್ ಸದಸ್ಯರು, ಜೀರ್ಣೋದ್ದಾರ ಸಮಿತಿ, ಉತ್ಸವ ಸಮಿತಿ, ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಅಜ್ಜಾವರ : ವೈಭವದಿಂದ ನಡೆದ ಶ್ರೀ ಮಹಿಷಮರ್ದಿನೀ ದೇವರ ಭೂತಬಲಿ ಉತ್ಸವ Read More »

ಇಂದು ಗರಡಿಬೈಲ್ ಶ್ರೀ ಉಲ್ಲಾಕ್ಳು, ಕಾಚು ಕುಜುಂಬ ದೈವಸ್ಥಾನ ದಲ್ಲಿ ಸ್ವರ್ಣಪ್ರಶ್ನೆ ಚಿಂತನೆ

ಇಂದು 6-4-26 ನೇ ಸೋಮವಾರ ಪೂರ್ವಹ್ನ 10 ರಿಂದ ಗರಡಿಬೈಲ್ ಶ್ರೀ ಉಲ್ಲಾಕ್ಳು, ಕಾಚು ಕುಜುoಬ ದೈವಸ್ಥಾನ ದಲ್ಲಿ ಸ್ವರ್ಣಪ್ರಶ್ನೆ ಚಿಂತನೆಯು ದೈವಜ್ಞರು ನಡೆಸಲಿಧಾರೆ ಭಕ್ತಾದಿಗಳು ಆಗಮಿಸಬೇಕಾಗಿ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತ್ಥೂ ರ್ ತಿಳಿಸಿರುತಾರೆ.

ಇಂದು ಗರಡಿಬೈಲ್ ಶ್ರೀ ಉಲ್ಲಾಕ್ಳು, ಕಾಚು ಕುಜುಂಬ ದೈವಸ್ಥಾನ ದಲ್ಲಿ ಸ್ವರ್ಣಪ್ರಶ್ನೆ ಚಿಂತನೆ Read More »

error: Content is protected !!
Scroll to Top