‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವುದೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹರಿಪ್ರಸಾದ್, ‘ವಂದೇ ಮಾತರಂ ಗೀತೆ ಹಾಡಿದ್ದಕ್ಕೆ ಜೈಲು ಸೇರಿದ್ದು ಕಾಂಗ್ರೆಸ್ನವರು. ನಾವು ವಂದೇ ಮಾತರಂ ಗೀತೆಯನ್ನು ಒಪ್ಪಿಕೊಳ್ಳುತ್ತೇವೆ. ಆದರೆ 2 ಚರಣವನ್ನು ಮಾತ್ರ ಹಾಡುತ್ತೇವೆ. ಬಿಜೆಪಿಯವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಮ್ಮನ್ನು ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ನಾವು ಎರಡೇ ಚರಣವನ್ನು ಹಾಡುತ್ತೇವೆ’ ಎಂದು ಒತ್ತಿ ಹೇಳಿದ್ದಾರೆ.
ಬಿಜೆಪಿಯವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಮ್ಮನ್ನು ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ನಾವು ವಂದೇ ಮಾತರಂ ಗೀತೆಯ ಎರಡೇ ಚರಣವನ್ನು ಹಾಡುವುದು!
















