ಜನರ ಪ್ರೀತಿ ವಿಶ್ವಾಸದಿಂದ ಜನ ಪ್ರತಿನಿಧಿಗಳು ಹೆಚ್ಚು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮೇ.17ರಂದು ಬಹು ವರ್ಷಗಳ ಬೇಡಿಕೆಯಾದ ಅರಮನೆಯ ಬಲ್ನಾಡ್ ಹೊಳೆಗೆ ನಿರ್ಮಾಣವಾದ ನೂತನ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಬಹುಬೇಡಿಕೆಯಾದ 5 ಸೇತುವೆಗಳಿಗೆ ಈಗಾಗಲೇ ಅನುದಾನ ಇರಿಸಲಾಗಿದೆ. ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರೋಕಿ ಹೊಳಿ ಅನುದಾನ ಒದಗಿಸಿಕೊಟ್ಟಿದ್ದಾರೆ.ಅವರನ್ನುಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ.ನಾನು ಚುನಾವಣೆಗೆ ಮತಯಾಚನೆ ಸಂದರ್ಭದಲ್ಲಿ ಅರಮನೆಗಯ ಭಾಗದ ಜನರಿಗೆ ಅರಮನೆಯ ಸಂಪರ್ಕಿಸುವ ಬಲ್ನಾಡ್ ಹೊಳೆಗೆ ಸೇತುವೆ ನಿರ್ಮಾಣ ಮಾಡಿ ಕೊಡುವ ಭರಸೆ ನೀಡಿದ್ದೆ.ಈ ಭರವಸೆ ಇಂದು ಇಡೇರಿದೆ.ಇದರಿಂದ ನಾನು ಸೇರಿ ಈ ಭಾಗದ ಜನರಿಗೆ ಸಂತೃಪ್ತ ಭಾವನೆಯಾಗಿದೆ.ನಿಮ್ಮ ಮುಂದಿನ ಪ್ರಯಾಣ ಸುಖರವಾಗಿರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಸ್ ಕಂಜಿಪಿಲಿ ಮಾತನಾಡಿ ಬಿ.ಜೆ.ಪಿ ಸುಳ್ಳು ಭರವಸೆ ನೀಡುವುದಿಲ್ಲ. ಅರಮನೆಗಯ ಭಾಗದ ಜನರಿಗೆ ನಾವು ಸೇತುವೆ ನಿರ್ಮಾಣದ ಭರವಸೆ ನೀಡಿದ್ದೇವು. ಇಂದು ಸೇತುವೆ ನಿರ್ಮಾಣ ಆಗಿ ಉದ್ಘಾಟನೆಯಾವುದರ ಮೂಲಕ ಭರಸೆ ಇಡೇರಿದೆ.ಎಲಿಮಲೆ ಮರ್ಕಂಜ ರಸ್ತೆ ಅಭಿವೃದ್ಧಿಗೆ 5 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅರಮನೆಗಯ ಸೇತುವೆ ಅನುದಾನ ಮಂಜೂರು ಆಗಲು ಶ್ರಮಸಿದ ಹೋರಾಟದ ಬಗ್ಗೆ ವಿವರಿಸಿದರು. ತಾಲೂಕು ಮಾಜಿ ಉಪಾಧ್ಯಕ್ಷೆ ಪುಷ್ಪಾಮೇದಪ್ಪ, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಮರ್ಕಂಜ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಗೀತಾ ಹೊಸಯೊಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸ್ಥಳದಾನಿ ಸೇತುವೆಯ ಫಲಾನುಭವಿ ಎಲ್ಯಣ್ಣ ಅರಮನೆಗಯ ಸ್ಮರಣಿಕೆ ನೀಡಿದರು.ಶಾಸಕರನ್ನು ಸ್ಥಳೀಯ ಮಹಿಳೆಯವರು ಸನ್ಮಾನಿಸಿದರು.ಮರ್ಕಂಜ ಗ್ರಾಮ ಪಂಚಾಯತ್ ನಿಕಪೂರ್ವ ಉಪಾಧ್ಯಕ್ಷ ಗೋವಿಂದ ಅಳವು ಪಾರೆ ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಸುಬೋದ್ ಶೆಟ್ಟಿ ಮೇನಾಲ,ದಯಾನಂದ ಕುರುಂಜಿ,ಚಂದ್ರಶೇಖರ ಜೋಡಿಪಣೆ,ಕಿಶೋರ್ ಕುಮಾರ್ ಉಳುವಾರು,ಭಾರತಿ ಪುರುಶೋತ್ತಮ ತೇಜಕುಮಾರ ಅರಮನೆಗಯ,ಪ್ರಸಾದ್ ಕಾಟೂರು,ನವೀನ್ ಕಲ್ಲುಗುಡ್ಡೆ,ರಾಮಕ್ರಷ್ಣ, ಇತರರು ಉಪಸ್ಥಿತರಿದ್ದರು.





















































