ಸರಕಾರಿ ಹಿರಿಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೋಡಿಕಾನ ಇಲ್ಲಿಯ ೨೦೨೬-೨೭ ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆ ಮೂಲಕ ರಚಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ಧೃತನ್ ಎ.ಆರ್ (೭ನೇ ತರಗತಿ) ಮತ್ತು ಉಪ ಮುಖ್ಯಮಂತ್ರಿಯಾಗಿ ಭೂಷಣ್ – ಕೆ. ಭಟ್ (೬ ನೇ) ಆಯ್ಕೆಯಾದರು. ಗೃಹಮಂತ್ರಿಯಾಗಿ ಕರುಣೇಶ್ (೭ನೇ), ಉಪಗೃಹಮಂತ್ರಿಯಾಗಿ ಹರ್ಷಿತ್ ಎ.ಕೆ. (೭ನೇ), ನೀರಾವರಿ ಮಂತ್ರಿಯಾಗಿ ಹವಿನ್ ಎ.ಪಿ.(೭ನೇ), ಉಪ ನೀರಾವರಿ ಮಂತ್ರಿಯಾಗಿ ತನುಷ್ ಬಿ.ಎನ್. (೭ನೇ), ವಿದ್ಯಾಮಂತ್ರಿಯಾಗಿ ಕೆ.ಎನ್.ತುಷಿತಾ (೭ನೇ), ಉಪವಿದ್ಯಾಮಂತ್ರಿಯಾಗಿ ತ್ರೀಕ್ಷಾ (೭ನೇ), ಆರೋಗ್ಯಮಂತ್ರಿಯಾಗಿ ಹನಿ ಎಂ.ಎಸ್ (೭ನೇ), ಉಪ ಆರೋಗ್ಯ ಮಂತ್ರಿಯಾಗಿ ಜನನಿ ಪಿ.ಎಸ್ (೭ನೇ), ಕ್ರೀಡಾಮಂತ್ರಿಯಾಗಿ ಗಮ್ಯ ಡಿ.ವಿ. (೭ನೇ), ಉಪಕ್ರೀಡಾ ಮಂತ್ರಿಯಾಗಿ ತ್ರಿಷಾದಿ (೭ನೇ), ಶಿಸ್ತುಮಂತ್ರಿಯಾಗಿ ತನ್ವಿ.ಕೆ.ಎನ್. (೭ನೇ), ಉಪ ಶಿಸ್ತು ಮಂತ್ರಿಯಾಗಿ ಎಸ್.ಎಸ್. ಶನಿತ (೬ನೇ), ಸಾಂಸ್ಕೃತಿಕ ಮಂತ್ರಿಯಾಗಿ ಧ್ರುವನ್.ಎಂ.ಆರ್ (೭ನೇ) ಉಪ ಸಾಂಸ್ಕೃತಿಕ ಮಂತ್ರಿಯಾಗಿ ರಚನಾ (೭ನೇ), ಆಹಾರ ಮಂತ್ರಿಯಾಗಿ ಸುಹಾಸ್.ಬಿ.ಸಿ. (೭ನೇ), ಉಪ ಆಹಾರ ಮಂತ್ರಿಯಾಗಿ ವಿಸ್ಮಿತಾ ಎ.ಬಿ (೭ನೇ) ಕೃಷಿ ಮಂತ್ರಿಯಾಗಿ ಕುಶಾನ್ ಎ.ಎ. (೭ನೇ), ಉಪಕೃಷಿ ಮಂತ್ರಿಯಾಗಿ ಪ್ರಜಯ್.ಎ.ಎನ್.ಮತ್ತು ಮೋಕ್ಷಿತ್.ಡಿ.ಹೆಚ್. (೭ನೇ), ಕಾನೂನು ಮಂತ್ರಿಯಾಗಿ ಪ್ರತೀಕ್ಷಾ ಎಸ್. (೭ನೇ) ಮತ್ತು ಉಪ ಕಾನೂನು ಮಂತ್ರಿಯಾಗಿ ನೀಕ್ಷಾ .ಪಿ (೬ನೇ), ಸಭಾಪತಿಯಾಗಿ ಭವಿಷ್ ಬಿ.ಎಸ್ (೬ನೇ) ಆಯ್ಕೆಯಾದರು. ಈ ಚುನಾವಣೆ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ತೊಡಿಕಾನ ಶಾಲಾ ಮಂತ್ರಿ ಮಂಡಲ ರಚನೆ



























































