ಶ್ರೀ. ಕ್ಷೇ.ಧ.ಗ್ರಾ.ಯೋಜನೆ (ರಿ)ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯ ಕ್ಷೇತ್ರದ ವತಿಯಿಂದ ಸ್ವಾತಂತ್ರೊತ್ಸವದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮವು ಸುಳ್ಯ ಸೀಮೆ ಮಹತೋಭಾರ ತೊಡಿಕಾನ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಬಸ್ ತಂಗುದಾಣಗಳ ಸ್ವಚ್ಚತೆ ಒಕ್ಕೂಟದ ಪದಾದಿಕಾರಿಗಳು, ಸದಸ್ಯರುಗಳು ಹಮ್ಮಿಕೊಂಡರು. ಅರಂತೋಡು ಗ್ರಾಮ ಪಂಚಾಯತ್ ನವರು ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಹೂವಯ್ಯ ಗೌಡ ಸೀತಾ ಪಂಜಿ ಕೋಡಿ,ವಿಶಾಲಾಕ್ಷಿ ಅಡ್ಯಡ್ಕ,ರತ್ನಾವತಿ ಪಂಜಿ ಕೋಡಿ, ರವೀಶ ಶೆಟ್ಯಡ್ಕ,ಲಿಲಾ ವತಿ ಕೆಮ್ಮಾರ, ಪ್ರೇಮಲತಾ ಬಾಳೆ ಕಜೆ,ಸುಲೋಚನಾ ಮುಪ್ಪ ಸೇರು, ಜಲಜಾಕ್ಷಿ ಶೆಟ್ಯಡ್ಕ, ವಿಜಯಲಕ್ಷ್ಮಿ ಹಾಗೂ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ ಉಪಸ್ಥಿತರಿದ್ದರು.
ತೊಡಿಕಾನ : ಸ್ವಚ್ಚತಾ ಕಾರ್ಯಕ್ರಮ













