ಗುಂಡ್ಯದಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾವಿನಕಟ್ಟೆಯ ಕವಿನ್ (ಕಿಶನ್) ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ಆ.27ರಂದು ವರದಿಯಾಗಿದೆ.
ಕವಿನ್ (ಕಿಶನ್) ಮಾವಿನಕಟ್ಟೆ ಮತ್ತು ಹರ್ಷಿತ್ ಎಲಿಮಲೆ ಎಂಬವರು ಆ 25ರಂದು ಹಾಸನ ಸಕಲೇಶಕೳರ ತೆರಳಿದ್ದರು. ಅಲ್ಲಿಂದ ಎಲಿಮಲೆಯ ಕಡೆಗೆ ಬರುವಾಗ ಹಾಸನ ರಸ್ತೆಯ ಗುಂಡ್ಯದಲ್ಲಿ ಕಾರು ಮತ್ತು ಲಾರಿ ಅಪಘಾತಗೊಂಡು ಕಾರಿನಲ್ಲಿದ್ದ ಇಬ್ಬರು ಗಂ ಗಾಯಗೊಂಡರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರಿನಲ್ಲಿದ್ದ ಹರ್ಷಿತ್ ಎಲಿಮಲೆಯವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕವಿನ್ ಮಾವಿನಕಟ್ಟೆ ನಿಧನ


















