ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ)ಸುಳ್ಯ ಇದರ ವತಿಯಿಂದ ಕರ್ನಾಟಕ ಆತ್ಲೆಟಿಕ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಕ೦ಠೀರವ ಕ್ರೀಡಾಂಗಣ ಬೆಂಗಳೂರು ಇಲ್ಲಿ ನಡೆದ ರಾಜ್ಯ ಜೂನಿಯರ್ ಆತ್ಲೆಟಿಕ್ ಕ್ರೀಡಾಕೂಟ’ 2026 ರ 18 ರ ವಯೋಮಿತಿಯ ಬಾಲಕಿಯರ ಕ್ರೀಡಾಕೂಟದಲ್ಲಿ400 ಮೀ ಓಟದಲ್ಲಿ ನೂತನ ರಾಜ್ಯ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಅಮರ ಮೂಡ್ನುರು ಗ್ರಾಮದ ಕುಕ್ಕುಜಡ್ಕ . ಶ್ರೀ ಸುರೇಶ ಮತ್ತು ಶ್ರೀಮತಿ ಅನಿತಾ ದಂಪತಿಗಳ ಪುತ್ರಿ ಕು. ಭಾನವಿ. ಪಿ. ಯಸ್. ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷೀ ಉರುಂಬಿ, ರೇವತಿ ಮದುವೆ ಗದ್ದೆ ಮತ್ತು ಶಿಕ್ಷಕಿ ಉಷಾಲತಾ ಪಡ್ಪು ಇವರು ಕು, ಭಾನವಿ ಇವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಆಡಳಿತ ಮಂಡಳಿ, ಅನುಷ್ಠಾನ ಸಮಿತಿ ಮತ್ತು ಗ್ರಾಮ ಸಂಚಾಲನ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ)ಸುಳ್ಯ ಇದರ ವತಿಯಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ಕು.ಭಾನವಿಯವರಿಗೆ ಸನ್ಮಾನ
















