ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಬಾರೊಂದರ ಎದುರುಗಡೆ ನಿಂತಿದ್ದ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಮಾ.14ರಂದು ರಾತ್ರಿ ವರದಿಯಾಗಿದೆ.
ಚೂರಿಯಿಂದ ಇರಿತಕೊಳಗಾದ ಯುವಕನನ್ನು ಬೀರಮಂಗಲದ ಹರೀಶ್ ಎಂದು ಗುರುತಿಸಲಾಗಿದೆ.
ಆತನ ಮಿತ್ರ ನೀತು ಎಂಬವರಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.
ಸುಳ್ಯದಲ್ಲಿ ಯುವಕನಿಗೆ ಚೂರಿ ಇರಿತ


















