ಶ್ರೀ ಶಾರದಾಂಬ ಭಜನಾ ಮಂದಿರ ಪಂಜ ಇದರ ಅಭಿವೃದ್ಧಿ ಹಾಗೂ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಇವರು ಬಿಡುಗಡೆಗೊಳಿಸಿ ಪ್ರಥಮ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ, ನಿವೇಶನ ಖರೀದಿ ಸಂಚಾಲಕರಾದ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಜೊತೆ ಕಾರ್ಯದರ್ಶಿ ರಾಜಕುಮಾರ್ ಬೇರ್ಯ ಸದಸ್ಯರಾದ ಕುಶಾಲಪ್ಪ ನೆಲ್ಲಿಕಟ್ಟೆ, ಶಿವಪ್ಪ ಸಂಕಡ್ಕ, ಜಿನ್ನಪ್ಪ ಗೌಡ ಗುಂಡಡ್ಕ, ವೀಣಾ ನಾರಾಯಣ ಪಂಜ
ಉಪಸ್ಥಿತರಿದ್ದರು.
ಸಭೆಯಲ್ಲಿ ಶಾರದಂಬಾ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ ದೇವಿಪ್ರಸಾದ್ ಕಾನತ್ಥೂ ರ್ ರವರಿಗೆ ಶ್ರೀ ಶಾರದಾಂಬ ಭಜನಾ ಮಂಡಳಿ ಯ ವತಿಯಿಂದ ಗೌರವಾರ್ಪಣೆ ಮಾಡಲಾಯಿತು
ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ

































































