ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ಸುಳ್ಯ
ಬೆಳ್ಳಾರೆ ವಲಯದ ಪೆರುವಾಜೆ ಕಾರ್ಯಕ್ಷೇತ್ರದಲ್ಲಿ ಈ ದಿನ ಪ್ರಥಮವಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿಜಿ ಪೇ ಕಾರ್ಯಕ್ರಮವನ್ನು ಜಲದುರ್ಗದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುನಿಲ್ ರೈ ರವರು ಉದ್ಘಾಟನೆಯನ್ನು ಮಾಡಿದರು.ಇವರು ಯೋಜನೆಯ ಕಾರ್ಯಕ್ರಮದ ಬಗ್ಗೆ, ಡಿಜಿ ಪೇ ಸೌಲಭ್ಯ ಪಡೆದುಕೊಳ್ಳುವಂತೆ ಮತ್ತು ಸ್ವ-ಉದ್ಯೋಗ ಮಾಡಿ ಸ್ವಂತ ಕೆಲಸ ಮಾಡುವಂತೆ ತಿಳಿಸಿದರು,ಈ ಸಂದರ್ಭದಲ್ಲಿ ಸಿ.ಎಸ್. ಸಿ ನೋಡೆಲ್ ಅಧಿಕಾರಿಯಾದ ಹೇಮಂತ್ ಸರ್ ರವರು ಡಿಜಿ ಪೇ ಯ ಬಗ್ಗೆ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಪೆರುವಾಜೆ ಒಕ್ಕೂಟ ಅಧ್ಯಕ್ಷರಾದ ಸುಂದರ ನಾಯ್ಕರವರು, ವಲಯ ಮೇಲ್ವಿಚಾರಕರಾದ ಉದಯ್ ಸರ್, ಸೇವಾಪ್ರತಿನಿಧಿಯಾದ ಪ್ರಿಯಾ ಕೆ, vle ರೂಪರವರು, ಸುವಿಧಾ ಸಹಾಯಕರಾದ ಲೋಲಕ್ಷಿಯವರು,ಪೆರುವಾಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಂಥಾಲಯ ಮೇಲ್ವಿಚಾರಕರು, ನಿಕಟ ಪೂರ್ವ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರ ATM ಕಾರ್ಡ್ ಮೂಲಕ ಹಣ 17000ಸಾವಿರ ವಿತ್ ಡ್ರಾ ಮಾಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಪೆರುವಾಜೆ: ಡಿಜಿ ಪೇ ಸೇವೆ ಉದ್ಘಾಟನೆ






























































