ಸುಳ್ಯ ತಾಲೂಕಿನ ಸುಳ್ಯ ನಗರದಲ್ಲಿ ಇಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿ ಚಾರ್ಜಿಂಗ್ ಕೇಂದ್ರ ಅಳವಡಿಸುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಅನುಕೂಲವಾಗುವ ದೃಷ್ಟಿ ಯಿಂದ ಸಂಘದಿಂದ ಮಾನ್ಯ ಶಾಸಕರಿಗೆ ಮತ್ತು ಮಾನ್ಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮೆಸ್ಕಾಂ ಸುಳ್ಯ ಇಂಜಿನಿಯರ್ ಹರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ. ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್ ನಿರ್ದೇಶಕರಾದ ಭಾನು ಪ್ರಕಾಶ್ ಹರೀಶ್ ನೆಕ್ರಾಜೆ. ಉಪಸ್ಥಿತರಿದ್ದರು..
ಭಾರತೀಯ ಮಜ್ದೂರ್ ಸಂಘ ಆಟೋ ಚಾಲಕರಿಂದ ಇಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ನಿರ್ಮಿಸುವಂತೆ ಮನವಿ













