ಒಡಿಯೂರು ಶ್ರೀಗಳ ಹುಟ್ಟು ಹಬ್ಬದ ಪ್ರಯುಕ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಆ.2ರಂದು ಕುತ್ಕುಂಜ ಘಟ ಸಮಿತಿ ವತಿಯಿಂದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ವನ್ನು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ರವರು ದೀಪ ಬೆಳಗಿಸಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಂಜ ವಲಯದ ಸಂಯೋಜಕರಾದ ಜಯಶ್ರೀ ಪಂಬೆತ್ತಾಡಿ, ಗ್ರಾಮದ ಸೇವಾದೀಕ್ಷಿತೆಯಾದ ಸವಿತಾ ನಾಗತೀರ್ಥ, ಘಟ ಸಮಿತಿ ಪದಾಧಿಕಾರಿಗಳಾದ ಕುಮದಾಕ್ಷಿ. ಶೋಭಾ. ಮಂಜುಳಾ. ರವೀಂದ್ರ ಇವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶ್ರೀಮತಿ ಮಂಜುಳಾ ನಿರೂಪಿಸಿದರು ಘಟ ಸಮಿತಿ ಯ ಉಪಾಧ್ಯಕ್ಷರಾಧ ಮಂಜುಳಾ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.













