ಸುಳ್ಯ ಕೇರ್ಪಳ ನಿವಾಸಿ ಪುರುಷೋತ್ತಮ ರಾವ್ (55ವರ್ಷ) ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ಆ.21ರಂದು ಮುಂಜಾನೆ ನಿಧನರಾದರು.
ಎಲೆಕ್ಟ್ರೀಷನ್ ಕೆಲಸ ಮಾಡುತ್ತಿದ್ದ ಅವರು
ಎರಡು ವಾರಗಳ ಹಿಂದೆ ಅವರಿಗೆ ಜ್ವರ ಬಂದ ಹಿನ್ನಲೆಯಲ್ಲಿ ಅವರು ಸುಳ್ಯದಿಂದ ಔಷಧ ಪಡೆದಿದ್ದರು. ಮೂರು ದಿನಗಳ ಹಿಂದೆ ಜ್ವರ ಉಲ್ಬಣಗೊಂಡಾಗ ಸುಳ್ಯದ ಆಸ್ಪತ್ರೆಗೆ ದಾಖಲಾದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ
ಮೃತರು ತಾಯಿ ಮೋಹಿನಿ,ಪತ್ನಿ ಉಷಾ, ಸಹೋದರ ಕಮಲಾಕ್ಷ ರಾವ್ ಕೇರ್ಪಳ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
















