ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ರಿ ಬಿಎಂಎಸ್ ಸಂಯೋಜಿತ ಸುಳ್ಯ ದ ಕ ಇದರ.. ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯನ್ನು ಜು.23ರಂದು ಸಂಘದ ಕಚೇರಿ ತಿಲಕ ಭವನ ಹಳೆಗೆಟ್ ನಲ್ಲಿ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ ಎಸ್ ಅವರ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ್ ರಾವ್ ವಕೀಲರು ಬೌದ್ದಿಕ್ ನೀಡಿದರು. ಮುಖ್ಯ ಅಭ್ಯಾಗತರಾಗಿ ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಪಿ ಪೈಚಾರ್ ಮತ್ತು ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ನ ಸದಸ್ಯರಾದ ರಾಧಾಕೃಷ್ಣ ಬೈತಡ್ಕ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಉಪಸ್ಥಿತರಿದ್ದರು ಸಂಘದ ನಿರ್ದೇಶಕರಾದ ಜನಾರ್ದನ ಶ್ರೀರಾಮ್ ಪೇಟೆ ರೋಹಿತ್ ಗಾಂಧಿನಗರ, ಶಿವಾನಂದ ಗೋಪಿಕಾ, ಮಾಜಿ ಕಾರ್ಯದರ್ಶಿ ಚಂದ್ರ ಶೇಖರ ಮರ್ಕಂಜ ಲೋಕೇಶ್ ಬಸ್ ನಿಲ್ದಾಣ, ಪ್ರದೀಪ್ ರಥಬೀದಿ ಜಗದೀಶ್ ಪೈಚಾರ್ ಚಾಮಯ್ಯ ಮಾರ್ಕೆಟ್ ರಸ್ತೆ, ಪ್ರಸನ್ನ ರಥಬೀದಿ ರಾಧಾ ಕೃಷ್ಣ ಕುರುಂಜಿಭಾಗ್ ಶಂಕರ ಕುರುಂಜಿಭಾಗ್, ವೇಣು ಗೋಪಾಲ ನಾಯರ್ ಚಿದಾನಂದ ಮಾಣಿಕ್ಯ ಚಿದಾನಂದ ಕುರುಂಜಿಭಾಗ್ ಮತ್ತಿತೀತರರು ಉಪಸ್ತಿತರಿದ್ದರು. ಸುರೇಂದ್ರ ಕಾಮತ್ ಸ್ವಾಗತಿಸಿ ರವಿ ಎಸ್ ವಂದಿಸಿದರು ನಾರಾಯಣ ಎಸ್ ಎಂ ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗೂ ಸಿಹಿ ಹಂಚಲಾಯಿತು
ಬಿಎಂಎಸ್ ಸಂಯೋಜಿತ ಆಟೋ ಚಾಲಕರಿಂದ ಭಾರತೀಯ ಮಜ್ದೂರ್ ಸಂಘದ 71 ನೇ ಸಂಸ್ಥಾಪನಾ ದಿನಾಚರಣೆ





































































