ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ ಶತಮಾನೋತ್ಸವ ಆಚರಣೆಯ ಪ್ರಾರಂಭೋತ್ಸವದ ಕರೆಯೋಲೆಯನ್ನು ಜುಲೈ 20 ರಂದು ಬಿಡುಗಡೆಗೊಳಿಸಲಾಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎ.ಭಾಸ್ಕರ ರಾವ್ ಬಯಂಬು,ಉಪಾಧ್ಯಕ್ಷರುಗಳಾದ ಶಿವರಾಮ ನಾರ್ಕೋಡು, ಅಬ್ದುಲ್ಲ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಲೋಕಯ್ಯ ಮಾಸ್ತರ್ ಅತ್ಯಾಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಎ. ಪಿ ಬಶೀರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೆಳ್ಯಪ್ಪ ಗೌಡ ಮುಡೂರು, ಸ. ಹಿ. ಪ್ರಾ ಶಾಲೆ ಅಜ್ಜಾವರದ ಮುಖ್ಯೋಪಾಧ್ಯಯರಾದ ಶ್ರೀಮತಿ ತೇಜಾವತಿ,ಸ್ಮರಣಸಂಚಿಕೆಯ ಸಂಚಾಲಕರಾದ ಮನಮೋಹನ ಮುಡೂರು, ಉಪಸಂಚಾಲಕರಾದ ಸೀತಾರಾಮ ಶಾಂತಿಮಜಲು,ಶ್ರೀಮತಿ ಶಶ್ಮಿ ಭಟ್ ಅಜ್ಜಾವರ, ಅಲಂಕಾರ ಸಮಿತಿಯ ಸಂಚಾಲಕರಾದ ನಾರಾಯಣ ಬಂಟ್ರಬೈಲು, ಶಿಕ್ಷಕಿ ಶ್ರೀಮತಿ ಭವಾನಿ, ಅಥಿತಿ ಶಿಕ್ಷಕಿಯರಾದ ಕು.ಹರ್ಷಿತಾ, ಕು.ಲಿಖಿತ, ಹಿರಿಯ ವಿದ್ಯಾರ್ಥಿ ರತೀಶ ನಾರಲು, ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಅಜ್ಜಾವರ : ಶಾಲಾ ಶತಮಾನೋತ್ಸವ ಆಚರಣೆಯ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ





































































